ಅತ್ತಿತ್ತ ಹಾರಾಡಿ
ಸುತ್ತ ಹೋರಾಡಿ
ಮೂಲೆ ಮೂಲೆಯ ಹುಡುಕಿ
ಕೈ ಬಡಿದು ತೊಡೆ ತಟ್ಟಿ
ಬಿಡದೆ ಬೆನ್ನಟ್ಟಿ
ಯುದ್ಧ ಗೆದ್ದಿದ್ದೇನೆ ನೋಡು..
ಕೈ ಬೀಸಿ ಕುಣಿದಾಡಿ
ಅತ್ತಿತ್ತ ನೆಗೆದಾಡಿ
ಕೈ ಸೆಳೆಸಿ ಕಾಲ್ ಉಳುಕಿ
ಮುಡಿ ಬಿಚ್ಚಿ ಹಾರಾಡಿ
ಒತ್ತರಿಸಿ ಬರುವ ಕೋಪಕ್ಕೆ
ಜಜ್ಜಿ ಕೆಡಹಿದ್ದೇನೆ ನೋಡು..
ಚಲುವೆ ಕೆನ್ನೆಯ ಬಳಸಿ
ಮೋಹಿಸಿ ಮುದ್ದಿಟ್ಟ
ಕ್ರೂರ ರಾಕ್ಷಸನ
ಕೈಕಾಲು ಮುರಿದಿಕ್ಕಿ
ರಕ್ತದೋಕುಳಿ ಹರಿಸಿ
ಚಿತ್ರ ಬರೆದಿದ್ದೇನೆ ನೋಡು..
ಮಾಡು ಸುಖ ನಿದ್ರೆಯನು
ಬಿಡು ದಾರಿ ಎನಗೀಗ
ಮತ್ತೆ ಹೋಗಲೇ ಬೇಕು
ಶತ್ರು ಸಂಹಾರಕ್ಕೆ
ಹುಡುಕುತ್ತ ಹುಡುಕುತ್ತ
ಮತ್ತೊಂದು ಸೊಳ್ಳೆಯನು.....!!!!!!!!!
ಮೇಡಮ್ ಸೊಳ್ಳೆ ಹೊಡೆಯುತ್ತಾ ...........................................................?
ReplyDeleteಆಹಾ.......... ಮಹಾ ಭೀಷಣ ಯುದ್ಧದ ವರ್ಣನೆ ಚನ್ನಾಗಿದೆ
ವಿಜಯಶ್ರೀ,
ReplyDeleteಚೆನ್ನಾಗಿದೆ ಕವನ! ಎಷ್ಟು ರಾಕ್ಷಸರನ್ನು ಬಲಿಹಾಕಿದಿರಿ?
ಇದೊಂದು ಒಳ್ಳೆಯ ಯುದ್ಧ..
ReplyDeleteಗುರಾಣಿ ಕತ್ತಿಗಳ ಝಳವಿಲ್ಲ,
ರಥ ಕುದುರೆಗಳ ದನಿಯಿಲ್ಲ,
ಸೈನಿಕರ ಕೂಗಾಟ,
ಕೊಂಬು-ಕಹಳೆಗಳ
ಅರಚಾಟ ,ಯಾವುದೂ ಇಲ್ಲ...
ಇವತ್ತಿನ ಬಾಂಬು-ಗೀಂಬುಗಳ
ಧೂಳಿಲ್ಲ..
ಗುಂಡು-ಟ್ಯಾಂಕುಗಳ
ಸುಳಿವಿಲ್ಲ..
ಇದೆ ಮನೆಯ ಒಳಗಿನ ಯುದ್ಧ..
ಸಂಜೆ ಆದೊಡೆ ,
ಸೊಳ್ಳೆ ಹೊಡೆಯಲು ಆಗು ಸಿದ್ಧ!!!!!!!!
ಮಹಾಬಲಗಿರಿಯವರೆ..
ReplyDeleteತಪ್ಪಿಸಿಕೊ೦ಡು ಹಾರುವ ಸೊಳ್ಳೆಯ ಹಿ೦ದೆ ನಾನೂ ಹಾರಾಡುತ್ತಾ ಭೀಷಣವಾಗಿ ಯುದ್ಧವನ್ನೇನೊ ಮಾಡಿದ್ದೇನೆ..!
ಅದರ ಬಾ೦ಧವರ ಕೋಪಕ್ಕೆ ಸಿಲುಕಿ ಮತ್ತೆ ಮೈ ಕೈ ಪರಚಿಕೊಳ್ಳುತ್ತಿದ್ದೇನೆ.
ಥ್ಯಾ೦ಕ್ಸ್..
ಕಾಕ..
ReplyDeleteಬಲಿ ಹಾಕಿದ೦ತೆಲ್ಲ ಮತ್ತೆ ಮತ್ತೆ ಹುಟ್ಟಿಕೊಳ್ಳುವ ರಕ್ತಬೀಜಾಸುರರಲ್ಲವೇ ಅವು..
ವ೦ದನೆಗಳು.
ಚಿನ್ಮಯ
ReplyDeleteನನ್ನ”ಒಳ್ಳೆಯ ಯುದ್ಧ”ವನ್ನು ಸು೦ದರವಾದ ಕವನದ ಮೂಲಕ ಹೊಗಳಿದ್ದೀರಿ.. ನನ್ನ ಕವಿತೆಗಿ೦ತಾ ನಿಮ್ಮ ಪ್ರತಿಕವಿತೆಯೇ ಸು೦ದರವಾಗಿದೆ..!
ಧನ್ಯವಾದಗಳು.
ಬಹಳ ಕಷ್ಟದಿಂದ ರಕ್ತಬೀಜಾಸುರರನ್ನು ಬಲಿ ಹಾಕಿದ್ದೀರಿ......ಹೀಗೆ ನಿಮ್ಮ ಯುದ್ದ ಮುಂದುವರೆಯಲಿ .
ReplyDeleteಅಕಟಕಟ.. ಅಂತ ಮತ್ತೆ ಹೋರಾಡಿ..
ReplyDeleteಜಯ ನಿಮ್ಮದಾಗಲಿ..
ಸೊಳ್ಳೆಗಳ ಸರ್ವನಾಶವಾಗಲಿ..
ನಂದು ಒಂದು ಆಲ್ ದ ಬೆಷ್ಟು ..
ಹ ಹ.. ಮಸ್ತ್ :)
ಹಹ..ಸೊಳ್ಳೆ ಪುರಾಣ ಸೊಗಸಾಗಿದೆ...! ಒ೦ದು ಚುಟುಕ ಜ್ಞಾಪಕ ಆಯ್ತು...!
ReplyDeleteಅಪಘಾತ..!
ನಡು
ಇರುಳಿನಲಿ
ಕಡಿದು
ಕಾಡಿದ
ಭ್ರರಮವ
ಬಿಡದೆ
ಬೆನ್ನಟ್ಟಿ
ಬಡಿಯೆ..
ಊದಿತ್ತು..
ನಲ್ಲ ನ
ಗಲ್ಲ..!
ವಾಹ್..! :)
ReplyDeleteಇದನ್ನು ನೀವು ಸೊಳ್ಳೆ ಹೊಡೀತಾನೆ ಬರೆದಿರಬೇಕು. online ಅನುಭವಜನ್ಯ ಕವನ..ಚೆನ್ನಾಗಿದೆ. !.
ReplyDeleteಸೊಳ್ಳೆ ಮೇಲೆ ಯುದ್ದ! ಲವ್ಲಿ ಲೈವ್ಲಿಯಾಗಿದೆ.
ReplyDeleteವಿಜಯ ಮೇಡಮ್,
ReplyDeleteನಿಜಕ್ಕೂ ಇದು ಸಕತ್ ಯುದ್ದ. ಆಸ್ತ್ರಗಳಿಲ್ಲದೇ ರಾಕ್ಷಸರನ್ನು ಬಲಿ ಹಾಕಿದ ರೀತಿ ಚೆನ್ನಾಗಿದೆ...all the best..
ನಿಮ್ಮ ಕವನ ನಮ್ಮ ಮಂಗಳೂರಿಗೆ ಅನ್ವಯಿಸುತ್ತದೆ.
ReplyDeleteನಮ್ಮ ಊರಿನಲ್ಲಿ ನಿಮ್ಮ ರಾಕ್ಷಸರ ದಾಳಿ ಅಧಿಕನೆ
ಚೆನ್ನಾಗಿದೆ ನಿಮ್ಮ ವಣ೯ನೆ
Superrrr!! ಮೊದಲು ಏನೋ ಅಂದುಕೊಂಡೆ.. "ಚೆಲುವೆಯ ಕೆನ್ನೆಯ ಬಳಿಸಿ ಮೋಹಿಸಿ ಮುತ್ತಿಟ್ಟ..." ಎಂಬ ಸಾಲುಗಳು ಕುತೂಹಲ ಮೂಡಿಸಿದವು.. ಏನಿರಬಹುದು? ಏನಿರಬಹುದು? ಎಂದು ಕೊನೆ ಸಾಲಿನವರೆಗೂ ಗುಟ್ಟಾಗಿದ್ದ ವಿಷಯ ಸೊಳ್ಳೆ ಎಂದು ತಿಳಿದು ನಗು ಬಂದಿತು.. ಸೊಳ್ಳೆ ಕೊಂದ ಪರಾಕ್ರಮಿಗೆ ಶರಣಾಗುವೆ.. ಉತ್ತಮ ಕವನ!
ReplyDeletehahaha...chennagide gelathi...kone varegu heluttiruvu solle ya vishaya yembaa arivaagalilla....chennagide
ReplyDeleteಹೆಗ್ಡೆ ಜಿ..
ReplyDeleteನನ್ನ ಯುದ್ಧಕ್ಕೆ ನಿಮ್ಮಿ೦ದ ಪ್ರೋತ್ಸಾಹಕರ ನುಡಿಗಳನ್ನು ಕೇಳಿ ಇನ್ನಷ್ಟು ಹುರುಪಿನಿ೦ದ ಹೋರಾಡುತ್ತಿದ್ದೇನೆ..!
ಥ್ಯಾ೦ಕ್ಸ್..:)
ನಿಲ್ಲದ ಅ ರವರೆ..
ReplyDeleteಸರ್ವನಾಶವಾಗಲಿ ಎ೦ಬ ನಿಮ್ಮ ಹಾರೈಕೆಯ ಮೇರೆಗೆ ಮತ್ತಷ್ಟ್ ಜೋರಿ೦ದ್ ಯುದ್ಧ ಮಾಡ್ಲಿಕ್ ಹತ್ತೀನ್ರೀ... :)
ಥ್ಯಾ೦ಕ್ಸ್..:)
ಅನಂತ ಸರ್..
ReplyDeleteಸೊಳ್ಳೆ ಪುರಾಣದಿ೦ದ ಚುಟುಕು ನೆನಪಿಸಿದ್ದೀರಿ..ಚನ್ನಾಗಿದೆ..
ಆತ್ಮೀಯ ಪ್ರತಿಕ್ರಿಯೆಗೆ ವ೦ದನೆಗಳು.
ಮನಮುಕ್ತಾ
ReplyDeleteಥ್ಯಾ೦ಕ್ಸ್..:)
ಸುಬ್ರಹ್ಮಣ್ಯ..ಅವರೆ..
ReplyDeleteಬಹುಶ: ಈ ಯುದ್ಧವನ್ನು ನೀವೂ ಮಾಡುತ್ತಿರಲೇ ಬೇಕು ಈಗ ಅಲ್ಲವೇ..?
ವ೦ದನೆಗಳು.
ಗುಬ್ಬಚ್ಚಿ ಸತೀಶ್
ReplyDeleteತು೦ಬಾ ಥ್ಯಾ೦ಕ್ಸ್..:)
ಶಿವು ಸರ್
ReplyDeleteಹೆಣದ ಫೋಟೋ ಒ೦ದ್ ತೆಗೆಯಲು ಆಗಲಿಲ್ಲ ನೋಡಿ..
ಥ್ಯಾ೦ಕ್ಸ್..
ಆಶಾ..
ReplyDeleteನೀವೂ ಯುದ್ಧಕ್ಕೆ ಸನ್ನದ್ಧರಾಗಿ.. ಮತ್ತೆ..:)
ಥ್ಯಾ೦ಕ್ ಯೂ..
ಪ್ರದೀಪ್ ಅವರೆ
ReplyDeleteಕ್ರೈಮ್ ಸ್ಟೋರಿಯಲ್ಲಿ ಯಾವಾಗಲೂ ಸಸ್ಪೆನ್ಸ್ ಕಾಪಾಡಿಕೊಳ್ಳಬೇಕು....ಅಲ್ಲವೇ ಮತ್ತೆ...:)
ಥ್ಯಾ೦ಕ್ಸ್..
ಮೌನರಾಗ..ದವರೆ..
ReplyDeleteನನ್ನ ಚಿತ್ತಾರದರಮನೆಗೆ ಸ್ವಾಗತ..
ಸೊಳ್ಳೇ ಯುದ್ಧಕ್ಕೆ ನೀವೂ ಜೊತೆಗೂಡಿದಿರಿ..
ಥ್ಯಾ೦ಕ್ಸ್..
nimma solle yuddha chennagide. nakku nakku susthadhe.
ReplyDeleteEno serious kavana endukonde..haha chennagide!
ReplyDeleteಸಖತ್ ಆಗಿದೆ ಕವನ... ಮೊದಲು ಭೀಮನ ಕುರಿತಾಗೇನೋ ಅಂದ್ಕೊಂಡೆ.. ಆಮೇಲೆ ಗೊತ್ತಾಯ್ತು.. ಹುಲಿಯೆಂದುಕೊಂಡಿದ್ದು ಕೊನೆಗೆ ಇಲಿಯೂ ಅಲ್ಲ ಎಂದು :):)
ReplyDeleteMadam,
ReplyDeleteyaavudo serious vishyada bagge kavana andkondidde, koneyalli idu 'solle' jotegina yuddha endu tilidu nagu banthu...Kavana Chennagide..
Yaavdo yuddada bagge serious matter antha tilkondidre,sollegala samharada bagge...chennagide
ReplyDeleteha ha ha :)
ReplyDeleteHa ha ha.. naneno bheema dushyasasana yudda andkandi... antu solleyannu virouchitavaagi saysidde !!
ReplyDeletePravi
ಮೇರಿ,
ReplyDeleteಕವಿತಾ,
ತೇಜಸ್ವಿನಿ,
ಅಶೋಕ್ ಕೊಡ್ಲಾಡೀ,
ಸೀತಾರಾ೦ ಸರ್;
ಗಿರೀಶ್,
ಸುಧೇಶ್,
ಮತ್ತು ಪ್ರವೀಣ್..
ನಿಮ್ಮ ಆತ್ಮೀಯ ಪ್ರತಿಕ್ರಿಯೆಗಳಿಗೆ ವ೦ದನೆಗಳು.
ಹಹಹ ಸೊಳ್ಲೆಯನು ರಕ್ಕಸನ ಹೋಲಿಸಿ ಬರೆದ ಯುದ್ಧಕಾಂಡ ..ಸೂಪರ್ ಕವನ...ಶುಭವಾಗಲಿ ಮತ್ತೊಂದು ಕದನಕೆ...
ReplyDeletethanks sir
ReplyDeleteha ha ha
ReplyDeletehahahaha...chennaagide
ReplyDelete