Thursday, January 5, 2012

ಗೋಲ್ಕೊ೦ಡ ಕೋಟೆಯ ಕೆಲ ನೆನಪುಗಳು.

 ಹೈದರಾಬಾದಿನಲ್ಲಿ ನೋಡಿದ ಸ್ಥಳಗಳಲ್ಲಿ ನನ್ನನ್ನು ಸೆಳೆದದ್ದು ಈ ಕೋಟೆ.
  ಕೋಟೆ ಕೊತ್ತಲಗಳನ್ನು ನೋಡಲು ಅದೇಕೋ ತುಂಬಾ ಇಷ್ಟ. ಆಗಿನ ಕಾಲದ ಜನ ಜೀವನ ಹೇಗಿರಬಹುದು ? ಅವರೇನು ಮಾಡುತ್ತಿದ್ದರು? ಅಲ್ಲಿಯ ವಾಸ್ತು ಶಿಲ್ಪದ ವಿಶೇಷತೆ ಇವೆಲ್ಲ ಮನಸ್ಸನ್ನು ಕಾಡಲು ಶುರುಮಾಡಿಬಿಡುತ್ತವೆ.


 ಇಲ್ಲಿಂದ ಕೋಟೆ  ಹತ್ತಲು ಶುರು...









 ಬಾಲ ಹಿಸಾರ್ ದ್ವಾರ ..



 ಬಾಲಹಿಸಾರಿನ ದ್ವಾರದ ಒಳಭಾಗದಲ್ಲಿ ಚಾವಣಿಯನ್ನು ಗಮನಿಸಿ.  ಇದರ ಕೆಳಗೆ  ಚಪ್ಪಾಳೆ ತಟ್ಟಿದರೆ ಅದು ಕೋಟೆಯ  ಮೇಲ್ಭಾಗದಲ್ಲಿ ಕೇಳಲ್ಪಡುತ್ತಿತ್ತಂತೆ.   ದ್ವಾರಪಾಲಕರು ಚಪ್ಪಾಳೆ ತಟ್ಟುವುದರ ಮೂಲಕ ಒಳಪ್ರವೇಶಿಸಿದವರು ಮಿತ್ರರೊ? ಶತ್ರುಗಳೋ  ಎಂಬ ಸೂಚನೆಯನ್ನು ರಾಜನಿಗೆ  ರವಾನಿಸುತ್ತಿದ್ದರಂತೆ.



 ದರ್ಬಾರ್ ಹಾಲ್  ನ ನೋಟ ದೂರದಿಂದ..!



 ಈ ಕಲ್ಲು ನೋಡಿ, ಎರಡು ಕ್ವಿಂಟಾಲ್ ಇದೆಯಂತೆ. ಇದನ್ನು ಎತ್ತಿದವರಿಗೆ ಕುತುಬಶಾಹಿ ರಾಜರ ಸೈನ್ಯದಲ್ಲಿ  ಕೆಲಸ ಗ್ಯಾರಂಟಿ.ತಲೆಗಿಂತ ತಾಕತ್ತಿಗೆ ಬೆಲೆ...! ಇದನ್ನು ಯಾರೂ ಕದ್ದುಕೊಂಡು ಹೋಗಿಲ್ಲ ನೋಡಿ..!!



 ಕೋಟೆಯ ಒಳ ಬರುವವರನ್ನು , ಹೋಗುವವರನ್ನು ಪರೀಕ್ಷಿಸುವ ಚೆಕಿಂಗ್ ಏರಿಯ ..



ನಟರಾಜ್...



ತಾರಾಮತಿ ಪ್ಯಾಲೇಸ್.  ರಾಣಿಯ ನೆಂಟರಿಷ್ಟರು ಉಳಿದುಕೊಳ್ಳಲು ಇಲ್ಲಿ ವ್ಯವಸ್ಥೆಯಂತೆ. ಇಲ್ಲಿ ಗೋಡೆಗಳಿಗೂ ಕಿವಿಗಳಿವೆ ಮಾರಾಯ್ರೇ.!  ಕೋಣೆಯ    ಒಂದು ಮೂಲೆಯಲ್ಲಿ ಮಾತನಾಡಿದರೆ ಇನ್ನೊಂದು ಮೂಲೆಗೆ, ಮಧ್ಯದಲ್ಲಿ ಮಾತಾಡಿದರೆ ಮೇಲಿನ ಕೋಣೆಗೆ, ಹೀಗೆ ಯಾರು ಏನು ಪಿಸುಗುಟ್ಟಿದರೂ ಕೇಳಿಸುತ್ತದೆ. ನಾವು ಸುಮಾರು ಟ್ರಯಲ್ ಮಾಡಿದೆವು..! ಏನೇ ಮಸಲತ್ತು ಮಾಡಿದರೂ ಗೊತ್ತಾಗುವ ಹಾಗೆ ವ್ಯವಸ್ಥೆ ..! ಇಲ್ಲಿ ಯಾವ ಗುಟ್ಟು ಮಾಡಿದರೂ ಅದು ರಟ್ಟು ...




 ಕೋಟೆಯ  ತುದಿಯಲ್ಲಿರುವ  ಅರಮನೆಯ ಮೇಲೆ ಚಾರ್ಮಿನಾರಿನ ಪ್ರತಿರೂಪ.  ಇದಕ್ಕೆ ನೇರವಾಗಿ  ಎಂಟು   ಕಿ.ಮೀ. ದೂರದಲ್ಲಿ ಚಾರ್ ಮಿನಾರ್ ಇದೆ.( ಚಾರ್ಮಿನಾರ್ ನೋಡಲು ಸುಂದರವಾಗಿದೆ. ಅಲ್ಲಿ ಹೋದಾಗ ಅದರ ಸೌಂದರ್ಯವನ್ನು ಮಾತ್ರ ನೋಡಬೇಕು.. ! ಕಾಲು ಬುಡ ನೋಡಬಾರದು.. ಅಲ್ಲಿಯ ಸುತ್ತಲಿನ  ಸ್ಥಳ ನನಗೆ ರಾಜರ ಪೀಕದಾನಿಯನ್ನು    ನೆನಪಿಸಿತು. ಅದು ಹೈದರಾಬಾದಿನ ಪೀಕದಾನಿ ...!!)




ಕೋಟೆ ಹತ್ತಲು ಮೆಟ್ಟಿಲುಗಳು..



ಕರ್ಟನ್ ವಾಲ್ .. ಸೈನಿಕರು ಯುದ್ಧದ ಸಮಯದಲ್ಲಿ  ಶತ್ರುಗಳ ಚಲನವಲನವನ್ನು ಇದರ ಮರೆಯಿಂದ  ಗಮನಿಸುತ್ತಿದ್ದರಂತೆ..



 ಬಾಲಹಿಸಾರಿನ ಮೆಟ್ಟಿಲು  ಹತ್ತಿ  ದರ್ಬಾರ್ ಹಾಲ್ ನೋಡಲು ಹೋಗಬೇಕಿದೆ.. ಆಗ ನಾನು..!!!!


ಕೋಟೆಯ ಮೇಲಿನಿಂದ ಕೆಳಗೆ ನೋಡಿದರೆ ಹಾಳಾದ ವಾಸ್ತುಶಿಲ್ಪಗಳು, ಅರಮನೆಗಳು ಒಂದೇ ದೃಷ್ಟಿಗೆ ನಿಲುಕುತ್ತವೆ.



ಕೋಟೆಯ ಮೇಲಿನಿಂದ ಕೆಳಗೆ ನೋಡಿದಾಗ ...:( 



ನೀರು ಸಂಗ್ರಹಕ್ಕೆ.. 
ಆಗಲೇ ಅವರು ಮಳೆ ಕೊಯ್ಲು ಮಾಡುತ್ತಿದ್ದರಂತೆ. ಯುದ್ಧದ ಸಮಯದಲ್ಲಿ  ನೀರಿನ ಅಭಾವವಾಗದಿರಲು ನೀರು ಶೇಖರಣೆ ಮಾಡುತ್ತಿದ್ದರಂತೆ.


ವಾತಾಯನ ವ್ಯವಸ್ಥೆಗೆ ..ಕಿಂಡಿ.


ಇದು ಏರ್ ಕಂಡಿಶನ್  ವ್ಯವಸ್ಥೆ, ಗೋಡೆಯಲ್ಲಿ ಹುದುಗಿಸಿದ  ಮಣ್ಣಿನ ಪೈಪುಗಳ ಮೂಲಕ ನೀರು ಸಂಚಲನೆ.

ಆಗಿನ ಕಾಲದ ರಾಜರ ವೈಭವಗಳನ್ನು ಆಯಾ ಸ್ಥಳಗಳಲ್ಲಿಯೇ ಕಲ್ಪಿಸಿಕೊಳ್ಳಲು ಒಂತರಾ ಮಜಾ.ಅವರದ್ದೇನು ವೈಭೋಗ, ಆರ್ಭಟ !     ಆದರೂ ಈಗಿನಂತೆ ವಿಮಾನು, ಇಂಟರ್ನೆಟ್ಟು, ಮೆಟ್ರೋ ಟ್ರೇನು ಇದೆಲ್ಲ ಇರಲಿಲ್ಲ ಬಿಡಿ. ಸಾಮಾನ್ಯ ಜನರಾದರೂ   ನಾವೇ ಬೆಟರ್ರು.. :)